ಕಳ್ಳ ನೋಟ ಬೀರಿ

ಕಳ್ಳ ನೋಟ ಬೀರಿ
ಎನ್ನ ಮನವ ಕದ್ದವ
ಎಲ್ಲಿಹ ಹೇಳೆ! ಸಖಿ ||

ಇರುಳು ಮರಳಿತು
ಚಂದ್ರಮ ಬಂದನು
ನೀನೇ ಪುಣ್ಯವತಿ ಚಕೋರಿ ||

ಚಂದ್ರಮ ನಿನಗಾಗಿ
ಪ್ರೀತಿ ಬೆಳದಿಂಗಳಾಗಿ
ಮುತ್ತನಿತ್ತನೇ ನೀನೇ ಪುಣ್ಯವತಿ ||

ವಿರಹದ ಬೇಗೆಯಲಿ
ರಾಧೆ ನಾ ಒಂಟಿಯಾದೆ
ಶ್ಯಾಮ ಬರಲಿಲ್ಲ ಚಂದ್ರಮುಖಿ ||

ಕಳಿಸಿಹೆ ಸಂದೇಶ
ಬರಲಿಲ್ಲ ಉತ್ತರ
ಬಾರದಿಹ ನೇಕೆ ಸಖಿ ||

ಯಾರ ಅರಿವಿಗೆ ಈ ಶಿಕ್ಷೆ
ಮನವು ಮಿಡಿದಿದೆ
ಎನ್ನ ಕೆಣಕದಿರು ಚಂದ್ರಮುಖಿ ||

ಕೊಳಲುನಾದ ಹೊಮ್ಮಿ ರೂಪವಾಗಿ
ಬೃಂದಾವನ ಪಿಸು ಮಾತಲಿ
ಅಣಕಿಸಿತೆನಗೆ ಕೇಳೆ ಸಖಿ ||

ಬೆಳದಿಂಗಳ ಸಂಜೆ
ಎನ್ನ ತಾಯ ಕರೆಗೆ
ಓಗೊಡುವ ಮುನ್ನ
ಅವನ ಕಾಣದೆ ನೊಂದನೇ ಸಖಿ ||

ಬಿಡಲಾರೆ ಶ್ಯಾಮ
ಹುಡುಕುವೆ ಹಗಲಿರುಳು
ಆತ್ಮನಂದನ ರಾಧೇಯನ್ನರಸ
ಕೇಳೆ ಸಖಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳೆಯನ ಜೊತೆ ಸಮಾಲೋಚನೆ
Next post ಅಮ್ಮನಿಗೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys